ಸುಮುಖ ಎಂಟರ್ಪ್ರೈಸಸ್ ಲಾಂಛನದಲ್ಲಿ, ರಘುಗೌಡ ನಿರ್ಮಾಣದ ಮಿ||ಮೊಮ್ಮಗ ಚಿತ್ರಕ್ಕೆ ಬಟ್ಟಲು ಕಣ್ಣಲ್ಲೇ ಕೊಟ್ಟಳು ಸನ್ನೆ, ನಾ ತಟ್ಟನೆ ಕೊಟ್ಟೆನು ಅವಳಿಗೆ ನನ್ನೇ, ಸವಿ ಪ್ರೇಮವೇ ಹಾಜರಿಯಾಗೋಯ್ತು, ಈ ಹೃದಯಕೆ ಏನೋ ಸಂತೋಷ.... ಎಂಬ ಹಾಡಿನ ಚಿತ್ರೀಕರಣ ನಡೆದು ಪೂರ್ಣಗೊಂಡಿತು. ಈ ಚಿತ್ರ ತಾತ ಮತ್ತು ಮೊಮ್ಮಗನ ಬಾಂಧವ್ಯದ ಕಥಾವಸ್ತುವುಳ್ಳ ಈ ಚಿತ್ರವು ಕಳೆದ ವರ್ಷ ತಮಿಳಿನಲ್ಲಿ ಯಶಸ್ವೀ ಚಿತ್ರಗಳಲ್ಲೊಂದಾದ ಮಂಜಾಪೈ ಚಿತ್ರದ ರೀಮೇಕ್. ಮೂಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರಾಘವನ್, ಕನ್ನಡದಲ್ಲಿ ಕಥೆ-ಚಿತ್ರಕತೆ-ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆ - ಮಳವಳ್ಳಿ ಸಾಯಿಕೃಷ್ಣ, ಸಾಹಿತ್ಯ- ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಸಂಗೀತ-ರಘುನಂದನ್, ಸಂಕಲನ - ದೇವ ರಾಘವನ್, ಕಲೆ-ಸೋಮಶೇಖರ್, ಸಾಹಸ - ಶಿವು, ನೃತ್ಯ-ದಿನೇಶ್, ಸಹನಿರ್ದೇಶನ-ನವರಸನ್, ನಿರ್ವಹಣೆ - ದಾಡಿ ರಮೇಶ್, ತಾರಾಗಣದಲ್ಲಿ - ರವಿ, ಓವಿಯಾ (ಕಿರಾತಕ ಚಿತ್ರದ ನಾಯಕಿ), ರಂಗಾಯಣ ರಘು, ಅವಿನಾಶ್, ಕುರಿ ಪ್ರತಾಪ್, ಮುಂತಾದವರಿದ್ದಾರೆ.